ವಿಲೀನ ಪ್ರಕ್ರಿಯೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ, ನಾವು ಒಂದೇ ಅಮ್ಮನ ಮಕ್ಕಳಾಗಿದ್ದೇವೆ, ಅಮ್ಮನ ಆತ್ಮದ ಪ್ರೇರಣೆಯಿಂದಲೇ ವಿಲೀನ ಸಾಧ್ಯವಾಗಿದೆ. ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ, ಎಐಎಡಿಎಂಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸದೃಢವಾಗಲಿದೆ ಎಂದು ಹೇಳಿದ್ದಾರೆ.