ಅಭಿವೃದ್ಧಿಯ ಸೈನಿಕರಾಗುವಂತೆ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ಸರ್ಕಾರಕ್ಕೆ ಜನತೆಯ ಕ್ಷೇಮ ಮತ್ತು ಸಂತೋಷವೇ ಸರ್ವೋಚ್ಛವಾದದ್ದು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಸೈನಿಕರಾಗುವಂತೆ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.
ಉದ್ಯಮಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ
ಉದ್ಯಮಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ
Updated on
ನವದೆಹಲಿ: ಸರ್ಕಾರಕ್ಕೆ ಜನತೆಯ ಕ್ಷೇಮ ಮತ್ತು ಸಂತೋಷವೇ ಸರ್ವೋಚ್ಛವಾದದ್ದು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಸೈನಿಕರಾಗುವಂತೆ ಉದ್ಯಮಿಗಳಿಗೆ ಕರೆ ನೀಡಿದ್ದಾರೆ. 
ಬಜಾಜ್ ಆಟೋ ಸಂಸ್ಥೆಯ ರಾಜೀವ್ ಬಜಾಜ್ ಸೇರಿದಂತೆ 200 ಯುವ ಉದ್ಯಮಿಗಳೊಂದಿಗೆ ಸಂವಾದ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಉದ್ಯಮಿಗಳಾಗಿ, ಉದ್ಯಮದ ನಾಯಕರುಗಳಾಗಿ ಬಡವರಿಗೆ ಏನು ಸಹಾಯ ಮಾಡಬಹುದು ಎಂಬುದನ್ನು ಯೋಚಿಸಿ ಎಂದು ಸಲಹೆ ನೀಡಿದ್ದಾರೆ. 
ಪ್ರತಿಯೊಬ್ಬ ನಾಗರಿಕನಿಗೂ ಈ ದೇಶ ನನ್ನದು, ನನ್ನ ದೇಶಕ್ಕಾಗಿ ಕೆಲಸ ಮಾಡಬೇಕು, ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕೆಂಬ ಭಾವನೆ ಇರಬೇಕು ಎಂದಿರುವ ಪ್ರಧಾನಿ 2022 ರ ವೇಳೆಗೆ ಯುವ ಉದ್ಯಮಿಗಳ್ಲು ಸಂಪೂರ್ಣವಾಗಿ ನಗದು ರಹಿತ ವಹಿವಾಟು ನಡೆಸಬೇಕೆಂದು ಕರೆ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com