ಅಧಿಕಾರಿಗಳೊಂದಿಗೆ 5 ಸಂವಾದ ಕಾರ್ಯಕ್ರಮದಲ್ಲಿ ಮೊದಲ ಸಂವಾದವನ್ನುದ್ದೇಸಿಸಿ ಇಂದು ಮಾತನಾಡಿದ ಪ್ರಧಾನಿ, ಉತ್ತಮ ಆಡಳಿತ ಅಧಿಕಾರಿಗಳಿಗೆ ಮುಖ್ಯವಾಗಿರುತ್ತದೆ. ಸರ್ಕಾರದ ಎಲ್ಲಾ ಇಲಾಖೆಗಳು, ವಿಭಾಗಗಳು ಸಾಮರಸ್ಯದಿಂದ ಕೆಲಸ ಮಾಡಬೇಕು. ಉತ್ತಮ ಫಲಿತಾಂಶ ಸಾಧಿಸಲು ಪರಸ್ಪರ ಸಹಭಾಗಿತ್ವ ಬೇಕಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲಾ ಅಧಿಕಾರಿಗಳು ಬಡಜನರು ಮತ್ತು ಸಾಮಾನ್ಯ ಜನರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.