ಭಾರತ-ಚೀನಾ ಡೊಕ್ಲಾಮ್ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು: ಬ್ರಿಟೀಶ್ ರಾಯಭಾರಿ

ಭಾರತ-ಚೀನಾ ಡೊಕ್ಲಾಮ್ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಭಾರತದ ಬ್ರಿಟೀಷ್ ರಾಯಭಾರಿ ಡೊಮಿನಿಕ್ ಅಸ್ಕ್ವಿತ್ ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟನ್ ಹೈಕಮಿಷನರ್
ಬ್ರಿಟನ್ ಹೈಕಮಿಷನರ್
Updated on
ಕೋಲ್ಕತ್ತಾ: ಭಾರತ-ಚೀನಾ ಡೊಕ್ಲಾಮ್ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಭಾರತದ ಬ್ರಿಟೀಷ್ ರಾಯಭಾರಿ ಡೊಮಿನಿಕ್ ಅಸ್ಕ್ವಿತ್ ಅಭಿಪ್ರಾಯಪಟ್ಟಿದ್ದಾರೆ. 
ಉಭಯ ರಾಷ್ಟ್ರಗಳು ಡೊಕ್ಲಾಮ್ ವಿವಾದದಲ್ಲಿ ಬ್ರಿಟನ್ ನ ಮಧ್ಯಪ್ರವೇಶವನ್ನು ಕೋರಿಲ್ಲ ಆದ್ದರಿಂದ ಬ್ರಿಟನ್ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಡೊಮಿನಿಕ್ ಅಸ್ಕ್ವಿತ್ ಸ್ಪಷ್ಟಪಡಿಸಿದ್ದಾರೆ. ಡೊಕ್ಲಾಮ್ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಹಾಗೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಭಾರತ, ಚೀನಾ ಪ್ರಯತ್ನಿಸುತ್ತಿವೆ ಎಂದು ಡೊಮಿನಿಕ್ ಅಸ್ಕ್ವಿತ್ ಹೇಳಿದ್ದಾರೆ. 
ಮುಂದಿನ ವಾರಗಳಲ್ಲಿ ಈ ಬಗ್ಗೆ ಚರ್ಚಿಸಲು ಭಾರತ-ಚೀನಾಗೆ ಅವಕಾಶಗಳು ದೊರೆಯಲಿವೆ ಆಗ ಈ ವಿಷಯ ಪ್ರಗತಿ ಸಾಧಿಸಲಿದೆ, ಇದಕ್ಕಾಗಿ ಉಭಯ ರಾಷ್ಟ್ರಗಳನ್ನೂ ನಾವು ಉತ್ತೇಜಿಸುತ್ತೇವೆ ಎಂದು ಡೊಮಿನಿಕ್ ಅಸ್ಕ್ವಿತ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com