ಗುರುವಾರ ಹನುಮಾನ್ ದೇವಾಲಯದ ಮೇಲೆ ಪಾಕಿಸ್ತಾನ ಧ್ವಜ ಹಾರಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಪೊಲೀಸರು ಭಾವುಟ ತೆರವುಗೊಳಿಸುವಂತೆ ದೇವಾಲಯದ ಪೂಜಾರಿ ಸೂಚಿಸಿದ್ದಾರೆ. ಅಂತೆ ಪೂಜಾರಿ ಭಾವುಟವನ್ನು ತೆಗೆದಿದ್ದಾರೆ. ಇದೇ ವೇಳೆ ದೇವಾಲಯದ ಗೋಡೆ ಮೇಲೆ ಸಂದೇಶವನ್ನು ಬರೆದಿದ್ದು ಅದರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಅಳಿಸಿಹಾಕುವ ಬೆದರಿಕೆಯನ್ನು ಹಾಕಿದ್ದಾರೆ.