ನಿನ್ನೆ ತೀರ್ಪು ಪ್ರಕಟಿಸುವ ಮುನ್ನ ರಾಮ್ ರಹೀಮ್ ಸಿಂಗ್ ಅವರೊಂದಿಗೆ ಪಂಚಕುಲ ಸಿಬಿಐ ವಿಶೇಷ ಕೋರ್ಟ್ ಆವರಣಕ್ಕೆ ಆಗಮಿಸಿದ್ದ ಗುರುದಾಸ್ ಸಿಂಗ್ ಅವರು ಬಾಬಾರ ಬ್ಯಾಗ್ ಹೊತ್ತೊಯ್ದ ದೃಶ್ಯ ಇಂದು ಮಾಧ್ಯಮಗಳಲ್ಲಿ ಪ್ರಸಾರವಾಗಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಹರಿಯಾಣ ಸರ್ಕಾರ ಅವರನ್ನು ಡೆಪ್ಯುಟಿ ಅಡ್ವೋಕೇಟ್ ಜನರಲ್ ಹುದ್ದೆಯಿಂದ ವಜಾಗೊಳಿಸಿದೆ.