2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀವು ನೀಡಿರುವ ಅನೇಕ ಭರವಸೆಗಳು, ಆಶ್ವಾಸನೆಗಳನ್ನು ಈಡೇರಿಸಿಲ್ಲ. 90 ಲಕ್ಷ ಕೋಟಿ ರೂಪಾಯಿ ಕಪ್ಪು ಹಣವನ್ನು ವಿದೇಶದಿಂದ ತರಿಸುವುದಾಗಿ ನೀಡಿರುವ ಆಶ್ವಾಸನೆಗಳು ಮೂರೂವರೆ ವರ್ಷಗಳ ಆಡಳಿತ ನಂತರವೂ ಈಡೇರಿಲ್ಲ. ಪ್ರತಿ ಬಡ ಭಾರತೀಯರ ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ಇಡುವುದಾಗಿ ನೀಡಿದ್ದ ಭರವಸೆಯನ್ನು ಕೂಡ ಈಡೇರಿಸಿಲ್ಲ. ಭಾರತ ದೇಶದ ಜನರು ಹಿಂದೆ ಏನು ನಡೆಯಿತು ಎಂಬುದನ್ನು ತಿಳಿಯಲು ಬಯಸುತ್ತಿಲ್ಲ. ಮುಂದೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಲು ಬಯಸುತ್ತಾರೆ. ನೀವು ದೇಶದ ದೇಶದ ಜನತೆಗೆ ಮೋಸ ಮಾಡುತ್ತಿದ್ದೀರಿ ಎಂದು ರಾಮ್ ಜೇಠ್ಮಲಾನಿ ಪತ್ರದಲ್ಲಿ ಆರೋಪಿಸಿದ್ದಾರೆ.