ಭಾರತದ ಭೇಟಿಯನ್ನು ಯಶಸ್ವಿ ಎಂದ ನೇಪಾಳ ಪ್ರಧಾನಿ

ಇತ್ತೀಚೆಗಷ್ಟೇ ತಾವು ಕೈಗೊಂಡಿದ್ದ ಭಾರತ ಭೇಟಿ ಯಶಸ್ವಿಯಾಗಿದೆ ಎಂದು ನೇಪಾಳ ಪ್ರಧಾನಿ ಷೇರ್‌ ಬಹಾದ್ದೂರ್‌ ದೆವುಬಾ ಹೇಳಿದ್ದಾರೆ.
ಷೇರ್‌ ಬಹಾದ್ದೂರ್‌ ದೆವುಬಾ
ಷೇರ್‌ ಬಹಾದ್ದೂರ್‌ ದೆವುಬಾ
Updated on
ಕಠ್ಮಂಡು: ಇತ್ತೀಚೆಗಷ್ಟೇ ತಾವು ಕೈಗೊಂಡಿದ್ದ ಭಾರತ ಭೇಟಿ ಯಶಸ್ವಿಯಾಗಿದೆ ಎಂದು ನೇಪಾಳ ಪ್ರಧಾನಿ ಷೇರ್‌ ಬಹಾದ್ದೂರ್‌ ದೆವುಬಾ ಹೇಳಿದ್ದಾರೆ. 
5 ದಿನಗಳ ಭಾರತ ಭೇಟಿಯ ಬಗ್ಗೆ ನೇಪಾಳ ಸಂಸತ್ ನಲ್ಲಿ ಮಾತನಾಡಿ ಮಾಹಿತಿ ನೀಡಿರುವ ಷೇರ್ ಬಹಾದ್ದೂರ್ ದೆವುಬಾ, ಭಾರತ ಪ್ರವಾಸ ಯಶಸ್ವಿಯಾಗಿದ್ದು, ನೇಪಾಳ- ಭಾರತ ಗಡಿ ಪ್ರದೇಶ ಜಲಾವೃತಗೊಂಡಿರುವುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ವಿಷಯಗಳನ್ನು ಚರ್ಚಿಸಲಾಗಿದ್ದು, ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ 5,000 ಮೆಘಾವ್ಯಾಟ್ ವಿದ್ಯುತ್ ಉತ್ಪಾದನೆಯ ಪಂಚೇಶ್ವರ್ ಮಲ್ಟಿಪರ್ಪಸ್ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ  ಪ್ರಧಾನಿ ಷೇರ್‌ ಬಹಾದ್ದೂರ್‌ ದೆವುಬಾ ನೇಪಾಳ ಸಂಸತ್ ಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com