ನವದೆಹಲಿ: ಆಧಾರ್ ನೊಂದಣಿ ಮಾಡಿ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುವ ಸಲುವಾದ ಅಂತಿಮ ದಿನಾಂಕವನ್ನು ಡಿಸೆಂಬರ್ 31ರವರೆಗೂ ಕೇಂದ್ರ ಸರಕಾರ ಗಡುವು ವಿಸ್ತರಿಸಲಿದೆ. ಈ ಕುರಿತ ಮಾಹಿತಿಯನ್ನು ಅಟಾರ್ನಿ ಜನರಲ್ ಮಾಧ್ಯಮಗಳಿಗೆ ತಿಳಿಸಿದರು.
ಆಧಾರ್ ಸಂಬಂಧಿ ಅರ್ಜಿಯ ವಿಚಾರಣೆ ನವೆಂಬರ್ ಮೊದಲ ವಾರದಲ್ಲಿ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇನ್ನೊಂದೆಡೆಯಲ್ಲಿ ಆದಾಯ ತೆರಿಗೆ ಕಟ್ಟುವವರು ತಮ್ಮ ಪ್ಯಾನ್ ನಂಬರ್ ಅನ್ನು ಆಧಾರ್ ನಂಬರ್ ಗೆ ಜೋಡಿಸುವುದಕ್ಕೆ ಸರ್ಕಾರ ನೀಡಿದ ಗಡುವು ಆಗಸ್ಟ್ 31ಕ್ಕೆ ಕೊನೆಯಾಗುತ್ತಿದೆ.