ಇದೇ ಮೊದಲ ಬಾರಿಗೆ ಆರ್ ಬಿಐ ಪ್ರತಿ ನೋಟನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ್ದು, ನಕಲಿ ನೋಟು ಮತ್ತು ಅಸಲಿ ನೋಟುಗಳನ್ನು ಪ್ರತ್ಯೇಕಿಸಲು ಇದರಿಂದ ಸಹಾಯವಾಗಿದೆ.ನಗದು ಅಮಾನ್ಯೀಕರಣದಿಂದ ಭಯೋತ್ಪಾದಕರಿಗೆ ಕಷ್ಟವಾಗುತ್ತಿದೆ. ಅವರಿಗೆ ಅಷ್ಟೊಂದು ಬೆಂಬಲ, ಸಹಾಯ ಸಿಗುತ್ತಿಲ್ಲ ಎಂಬುದು ಇತ್ತೀಚೆಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಸಾಕಷ್ಟು ನೋಟುಗಳು ಚಲಾವಣೆಯಲ್ಲಿ ಇಲ್ಲದಿದ್ದರೆ ಕಲ್ಲು ತೂರಾಟ ನಡೆಸುವವರನ್ನು ಒಟ್ಟು ಸೇರಿಸಲು ಕಷ್ಟವಾಗುತ್ತದೆ ಎಂದು ಜೇಟ್ಲಿ ವಿವರಿಸಿದರು.