ಎ.ಸೂರ್ಯಪ್ರಕಾಶ್
ದೇಶ
ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಕನ್ನಡಿಗ ಎ.ಸೂರ್ಯಪ್ರಕಾಶ್ ಪುನರಾಯ್ಕೆ
ಹಿರಿಯ ಪತ್ರಕರ್ತರಾದ ಎ.ಸೂರ್ಯಪ್ರಕಾಶ್ ಅವರನ್ನು ಪ್ರಸಾರ ಭಾರತಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮರುನೇಮಕ ಮಾಡಲಾಗಿದೆ.
ನವದೆಹಲಿ: ಹಿರಿಯ ಪತ್ರಕರ್ತರಾದ ಎ.ಸೂರ್ಯಪ್ರಕಾಶ್ ಅವರನ್ನು ಪ್ರಸಾರ ಭಾರತಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮರುನೇಮಕ ಮಾಡಲಾಗಿದೆ.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ನೇತೃತ್ವದ ಸಮಿತಿ ಸೂರ್ಯಪ್ರಕಾಶ್ ಹೆಸರನ್ನು ಶಿಫಾರಸ್ ಮಾಡಿದ್ದು ಇದರಂತೆ ಸ್ಮೃತಿ ಇರಾನಿ ನೇತೃತ್ವದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ನೇಮಕ ಆದೇಶವನ್ನು ಹೊರಡಿಸಿದೆ. ಇವರ ಸೇವಾವಧಿ 2020ರ ಫೆಬ್ರುವರಿ 8 ರವರೆಗೆ ಇರುತ್ತದೆ.
ಪ್ರಸಾರಭಾರತಿಯು ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೊ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.
ಹಾಸನದ ಅರಕಲಗೂಡು ಮೂಲದ ಹಿರಿಯ ಪತ್ರಕರ್ತರಾದ ಸೂರ್ಯಪ್ರಕಾಶ್ ಹಲವಾರು ಮುದ್ರನಾ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ದೆಹಲಿ ಮೂಲದ ವಿವೇಕಾನಂದ ಇಂಟರ್ ನ್ಯಾಶನಲ್ ಫೌಂಡೇಶನ್ ಆಲೋಚನಾ ಕೃತಿ, ಸಲಹಾ ಸಮಿತಿಯ ವಿಶೇಷ ಫೆಲೋ ಹಾಗೂ ಸಲಹಾ ಸಮಿತಿಯ ಸದಸ್ಯರೂ ಆಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ