ಬಾಬ್ರಿ ಮಸೀದಿ ಧ್ವಂಸಗೊಂಡು ಇಂದಿಗೆ 25 ವರ್ಷ

ರಾಮಜನ್ಮಭೂಮಿ ವಿವಾದ ಹಲವು ದಶಕಗಳಿಗೆ ಬಗೆಹರಿಯದೇ ಹಾಗೆಯೇ ಉಳಿದಿದೆ. ಅನೇಕ ಬಾರಿ ರಾಮಮಂದಿರಕ್ಕಾಗಿ......
ಬಾಬ್ರಿ ಮಸೀದಿ
ಬಾಬ್ರಿ ಮಸೀದಿ
Updated on
ರಾಮಜನ್ಮಭೂಮಿ ವಿವಾದ ಹಲವು ದಶಕಗಳಿಗೆ ಬಗೆಹರಿಯದೇ ಹಾಗೆಯೇ ಉಳಿದಿದೆ. ಅನೇಕ ಬಾರಿ ರಾಮಮಂದಿರಕ್ಕಾಗಿ ಚಳುವಳಿಗಳು ತೀವ್ರಗೊಂಡಿದ್ದು, ಶ್ರೀರಾಮ ಜನ್ಮಿಸಿದ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು ಎನ್ನಲಾದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಘಟನೆ ನಡೆದು ಇಂದಿಗೆ 25 ವರ್ಷಗಳು.
1992, ಡಿ.06 ರಂದು ಕರಸೇವಕರ ಆಕ್ರೋಶಕ್ಕೆ ಬಾಬ್ರಿ ಮಸೀದಿ ಗುರಿಯಾಗಿ ಧ್ವಂಸಗೊಂಡ ದಿನ. ಏಕ್ ಧಕ್ಕಾ ಔರ್ ದೋ, "ಬಾಬ್ರಿ ಮಸ್ಜೀದ್ ತೋಡ್ ದೋ" ಎಂಬ ಘೋಷಣೆಯೊಂದಿಗೆ ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. 1990 ರಿಂದ ರಾಮಜನ್ಮಭೂಮಿ ಚಳುವಳಿ ಕಾವು ಪಡೆದುಕೊಂಡಿತ್ತು. ಆರ್ ಎಸ್ ಎಸ್ ಹಾಗೂ ವಿಹೆಚ್ ಪಿ ಮುಖಂಡರ ನೇತೃತ್ವದಲ್ಲಿ ರಾಮ ಜನ್ಮಭೂಮಿಗಾಗಿ ನಿರಂತರ ಹೋರಾಟ ನಡೆದಿದ್ದು, ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ 1992 ರಲ್ಲಿ ನಡೆದಿದ್ದ ಘಟನೆ ರಾಮಜನ್ಮಭೂಮಿ ಪ್ರಕರಣಕ್ಕೆ ಹಾಗೂ ದೇಶದ ರಾಜಕಾರಣದಲ್ಲಿ ದೊಡ್ಡ ಮಟ್ಟದ ತಿರುವು ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com