ಮೋನಿಂದರ್ ಸಿಂಗ್ ಪಾಂಧೇರ್, ಸುರೀಂದರ್ ಕೊಲಿ
ಮೋನಿಂದರ್ ಸಿಂಗ್ ಪಾಂಧೇರ್, ಸುರೀಂದರ್ ಕೊಲಿ

ನಿತಾರಿ ಸರಣಿ ಹಂತಕರಿಗೆ ಗಲ್ಲು ಶಿಕ್ಷೆ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿತಾರಿ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೋನಿಂದರ್ ಸಿಂಗ್ ಪಾಂಧೇರ್ ಹಾಗೂ ಆತನ ಮನೆ...
Published on
ಘಾಜಿಯಾಬಾದ್: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿತಾರಿ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೋನಿಂದರ್ ಸಿಂಗ್ ಪಾಂಧೇರ್ ಹಾಗೂ ಆತನ ಮನೆ ಸಹಾಯಕ ಸುರೀಂದರ್ ಕೊಲಿಗೆ ಸಿಬಿಐ ವಿಶೇಷ ನ್ಯಾಯಾಲಯ 16 ಕೊಲೆಗಳ ಪೈಕಿ 9ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. 
2006ರಲ್ಲಿ ಮನೆ ಕೆಲಸದಾಕೆ 25 ವರ್ಷದ ಅಂಜಲಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿಕೆ ತಿವಾರಿ ಅವರು ಗಲ್ಲು ಶಿಕ್ಷೆ ವಿಧಿಸಿದ್ದಾರೆ. 
ನಿತಾರಿ ಸರಣಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಅದಾಗಲೇ ಎರಡು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನು ಏಳು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು ಆ ಪ್ರಕರಣಗಳ ತೀರ್ಪು ಏನಾಗಲಿದೆ ಎಂದು ಕಾದು ನೋಡಬೇಕು. 
2006ರ ಅಕ್ಟೋಬರ್ 12ರಂದು ಅಂಜಲಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ದೂರಿನನ್ವಯ ಡಿಸೆಂಬರ್ 29ರಂದು ಪೊಲೀಸರು ಸುರೀಂದರ್ ಕೊಲಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿತಾರಿ ಸರಣಿ ಕೊಲೆಗಳು ಬಯಲಿಗೆ ಬಂದಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com