ಕಳೆದ ವರ್ಷ ನಡೆದ ಪಕ್ಷದ ಸಂಸದರ ಸಭೆಯಲ್ಲಿ ನಾನು ಹಿಂದೂಳಿದ ವರ್ಗಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೆ. ಅಲ್ಲದೆ ಒಬಿಸಿಗೆ ಪ್ರತ್ಯೇಕ ಸಚಿವಾಲಯ ಬೇಕು ಎಂದು ಒತ್ತಾಯಿಸಿದ್ದೆ. ಇದರಿಂದ ಆಕ್ರೋಶಗೊಂಡ ಮೋದಿ, ಒಬಿಸಿಗೆ ಪ್ರತ್ಯೇಕ ಸಚಿವಾಲಯದ ಅಗತ್ಯ ಇಲ್ಲ ಎಂದಿದ್ದರು. ಆದರೆ ಈಗ ಒಬಿಸಿ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ ಎಂದು ಪಟೋಳೆ ದೂರಿದ್ದಾರೆ.