ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಕ್ಟೊಬರ್ 12 ರಂದು ಅಲ್ಲಾಹಾಬಾದ್ ಹೈಕೋರ್ಟ್ ಆರುಷಿ-ಹೇಮ್ ರಾಜ್ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ದಂತ ವೈದ್ಯ ದಂಪತಿಗಳ ಪುತ್ರಿ ಆರುಷಿ ಹಾಗೂ ಮನೆ ಕೆಲಸದ ವ್ಯಕ್ತಿಯಾಗಿದ್ದ ಹೇಮ್ ರಾಜ್ 2008 ರ ಮೇ 15 ರಂದು ಹತ್ಯೆಯಾಗಿದ್ದರು. ಮೇ.16 ರಂದು ಆರುಷಿ ಮೃತ ದೇಹ ಪತ್ತೆಯಾಗಿತ್ತು. ಪ್ರಮುಖ ಸಾಕ್ಷಿಯಾಗಿದ್ದ ಹೇಮ್ ರಾಜ್ ನಾಪತ್ತೆಯಾಗಿದ್ದ, ಆದರೆ ಮರು ದಿನ ಆತನ ಮೃತದೇಹವೂ ಪತ್ತೆಯಾಗಿತ್ತು.