'ಕಟ್ಟಡದ ಮುಂದಿನ ಭಾಗದಲ್ಲಿರುವ ರೂಮ್ ನಲ್ಲಿ ನಾವು ವಾಸಿಸುತ್ತಿದ್ದು, ಇಂದು ಬೆಳಗಿನ ಜಾವ 3ರಿಂದ 4 ಗಂಟೆಯ ಸುಮಾರಿಗೆ ದೊಡ್ಡ ಸದ್ದು ಕೇಳಿಬಂತು. ಇದರಿಂದ ಎಚ್ಚರಗೊಂಡ ಕಣ್ಣು ಕಾಣದ ನನ್ನ ತಾಯಿ ಆತಂಕದಿಂದ ನನ್ನನ್ನು ಎಬ್ಬಿಸಿದರು. ನಾನು ಕಳ್ಳರು ನುಗ್ಗಿರಬಹುದು ಎಂದು ಭಾವಿಸಿದೆ. ಅದೇ ಸಮಯಕ್ಕೆ ಒಂದು ಸ್ಫೋಟದ ಸದ್ದು ಕೇಳಿಸಿತು ಮತ್ತು ಅದು ಅಗ್ನಿ ಅವಘಡ ಎಂಬುದು ತಿಳಿಯಿತು. ಕೂಡಲೇ ಇಬ್ಬರು ಜೋರಾಗಿ ಕೂಗಿಕೊಂಡವೆ. ಇದರಿಂದ ಎಚ್ಚೆತ್ತುಕೊಂಡ ಕಟ್ಟಡದ ಮುಂದೆ ವಾಸಿಸುತ್ತಿದ್ದ ಐದು ಆರು ಜನ ಹೊರಕ್ಕೆ ಬಂದು ಪ್ರಾಣ ಉಳಿಸಕೊಂಡರು' ಎಂದು ಮಹಿಳೆಯ ಪುತ್ರ ತುಷಾರ್ ಪವಾರ್(27) ಅವರು ತಿಳಿಸಿದ್ದಾರೆ.