ಗೋವುಗಳನ್ನು ಕಳ್ಳಸಾಗಣೆ ಮಾಡಿದರೆ ಸಾಯುತ್ತೀರಿ: ರಾಜಸ್ತಾನ ಬಿಜೆಪಿ ಶಾಸಕ

ಗೋವನ್ನು ಕಳ್ಳಸಾಗಣೆ ಮಾಡಿ, ಆ ನಂತರ ನೀವು ಸಾಯುತ್ತೀರಿ ಎಂದು ರಾಜಸ್ತಾನದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗೋವು ಕಳ್ಳಸಾಗಣೆ
ಗೋವು ಕಳ್ಳಸಾಗಣೆ
ಜೈಪುರ: ಗೋವನ್ನು ಕಳ್ಳಸಾಗಣೆ ಮಾಡಿ, ಆ ನಂತರ ನೀವು ಸಾಯುತ್ತೀರಿ ಎಂದು ರಾಜಸ್ತಾನದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಅಲ್ವಾರ್ ಜಿಲ್ಲೆಯಲ್ಲಿ ಗೋವು ಕಳ್ಳಸಾಗಣೆ ಮಾಡುತ್ತಿದ್ದವರನ್ನು ಸ್ಥಳೀಯರು ಥಳಿಸಿರುವ ಘಟನೆ ನಡೆದ ಬೆನ್ನಲ್ಲೇ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಈ ಹೇಳಿಕೆ ನೀಡಿದ್ದಾರೆ. ನೀವು ಗೋವುಗಳನ್ನು ಕಳ್ಳಸಾಗಣೆ ಮಾಡಿ ಗೋಹತ್ಯೆ ಮಾಡಿದರೆ ಹೀಗೆಯೇ ಸಾಯುತ್ತೀರಿ ಎಂದು ಗ್ಯಾನ್ ದೇವ್ ಅಹುಜಾ ಎಚ್ಚರಿಕೆ ನೀಡಿದ್ದಾರೆ. 
ಟ್ರಕ್ ನಲ್ಲಿ 8 ಗೋವುಗಳನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಜಾಕಿರ್ ನ್ನು ಸ್ಥಳೀಯರು ಹಿಡಿದು ಥಳಿಸಿದ್ದರು. ಗಾಯಗೊಂಡಿದ್ದ ಜಾಕಿರ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com