ಸುಗಮ ಸಂಸತ್ ಕಲಾಪಕ್ಕೆ ಬಿಜೆಪಿಯಿಂದ ಇಡ್ಲಿ-ವಡೆ ಕಾರ್ಯತಂತ್ರ

ಸಂಸತ್ತಿನ ಚಳಿಗಾಲದ ಅಧಿವೇಶನ ಒಂದು ವಾರದಿಂದ ನಡೆಯುತ್ತಿದ್ದು ಪ್ರತಿಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ.
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಒಂದು ವಾರದಿಂದ ನಡೆಯುತ್ತಿದ್ದು ಪ್ರತಿಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಸರ್ಕಾರ ತಾನು ಸುಗಮ ಕಲಾಪ ನಡೆಸುವಂತಾಗಲು ಇದೀಗ ಹೊಸ ಮಾರ್ಗವೊಂದನ್ನು ಹುಡುಕಿದೆ.
ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಈ ಸಂಬಂಧ ರಾಜಿ ಮಾತುಕತೆ ನಡೆದಿದೆ. ಕೇಂದ್ರ ಸಚಿವ ವಿಜಯ್ ಗೋಯೆಲ್ ಮತ್ತು ಅರುಣ್ ಜೇಟ್ಲಿ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಮತ್ತು ಗುಲಾಮ್ ನಬಿ ಆಜಾದ್ ಅವರೊಡನೆ ಒಂದು ಗಂಟೆ ಕಾಲ ಸಭೆ ನಡೆಸಿದ್ದಾರೆ. ಆ ವೇಳೆ ನೀಡಲಾದ ಸಂಧಾನ ಸೂತ್ರಕ್ಕ ಎರಡೂ ಕಡೆಯ ನಾಯಕರು ಒಪ್ಪಿದ್ದಾರೆ.
ಕ್ರಿಸ್ ಮಸ್ ರಜೆಯ ನಂತರ ಸದನ ಪುನಃ ಸಭೆ ಸೇರಿದಾಗ ನಾಳೆ (ಬುಧವಾರ) ಬೆಳಿಗ್ಗೆ ಈ ಸಂಬಂಧ ಹೇಳಿಕೆ ನೀಡಲಾಗುತ್ತದೆ. ಆ ಸಮಯದಲ್ಲಿ ಪ್ರಧಾನಮಂತ್ರಿ ಸಹ ರಾಜ್ಯಸಭೆಯಲ್ಲಿ ಉಪಸ್ಥಿತರಾಗಿರುತ್ತಾರೆ. ಆದರೆ ಡಾ ಸಿಂಗ್ ಅವರ ಕುರಿತ ಟೀಕೆಗಳಿಗೆ ಅವರು ಕ್ಷಮೆ ಯಾಚಿಸುವುದಿಲ್ಲ. ಈ ಹಂತದಲ್ಲಿ ಕಾಂಗ್ರೆಸ್ ತನ್ನ ವೈಯುಕ್ತಿಕ ಬದ್ದತೆಗಾಗಿ ಡಾ. ಸಿಂಗ್ ಅವರ ಕ್ಷಮೆಯಾಚನೆ ಕುರಿತ ತನ್ನ ನಿಲುವನ್ನು ತುಸು ಸಡಿಲಗೊಳಿಸಲು ಒಪ್ಪಿಕೊಂಡಿದೆ. ಇದನ್ನು ಸಭೆ ಅನುಮೋದಿಸಿದೆ. ಆಂಧ್ರ ಶೈಲಿಯ ಉಪ್ಪಿಟ್ಟು, ಇಡ್ಲಿ-ವಡಾ ಬೆಳಗಿನ ಉಪಹಾರದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರನ್ನು ಕರೆದೊಯ್ಯುವ ಮೂಲಕ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಸಹ ಈ ಸಂಧಾನ ಮಾತುಕತೆಗೆ ದಾರಿ ಮಾಡಿಕೊಟ್ಟರು.
ಡಿಸೆಂಬರ್ 15 ರಂದು ರಾಜ್ಯಸಭೆಯ ಚಳಿಗಾಲದ ಅಧಿವೇಶನವು ಪ್ರಾರಂಬಗೊಂಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧದ ಮೋದಿ ಅವರ ಟೀಕೆಗಳಿಗೆ ಪ್ರಧಾನಿ ಖುದ್ದಾಗಿ ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ್ದು ಕಲಾಪಕ್ಕೆ ಪದೇಪದೇ ಅಡ್ಡಿಯುಂಟುಮಾಡುತ್ತಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com