ಇನ್ನು ಮಹಾರಾಷ್ಟ್ರ ಬಿಜೆಪಿ ನಾಯಕಿ ಶಾಯಿನಾ ಎನ್ ಸಿ ಮಾತನಾಡಿ "ಇದು ಬಹಳ ಸರಳವಾದ ವಾದವಾಯಿತು. ಆದರೆ ನಗರಪಾಲಿಕೆ ಈ ದುರಂತವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ಕಮಲಾ ಮಿಲ್ಸ್ ಆವರಣದೊಳಗಿನ ಅನಧಿಕೃತ, ಕಾನೂನು ಬಾಹಿರ ಕಟ್ಟಡಗಳಿಗೆ ಅನುಮತಿ ನೀಡಿರುವುದೇ ಈ ದುರಂತಕ್ಕೆ ಮೂಲ. ಹೀಗೆ ಕಾನೂನು ಬಾಹಿರವಾಗಿ ಅನುಮತಿ ಇತ್ತವರನ್ನೇ ಈ ಘಟನೆಗೆ ಹೊಣೆಗಾರರನ್ನಾಗಿಸಬೇಕು" ಎಂದರು.