ಬೆಂಗಳೂರು: "ಕಾಂಗ್ರೆಸ್ ಪಕ್ಷವು ತ್ರಿವಳಿ ತಲಾಕ್ ಮಸೂದೆಯಲ್ಲಿರುವ ಕೆಲ ಅಂಶಗಳನ್ನು ವಿರೋಧಿಸುತ್ತದೆ. ಅದರಲ್ಲಿ ಮುಖ್ಯವಾಗಿ ತ್ರಿವಳಿ ತಲಾಕ್ ಮಸೂದೆಯನುಸಾರ ಅಪರಾಧಿಗಳಿಗೆ ಜೈಲುವಾಸ ಶಿಕ್ಷೆಗೆ ಕಾಂಗ್ರೆಸ್ ಸಹಮತವಿಲ್ಲ. ತ್ರಿವಳಿ ತಲಾಖ್ ಮಸೂದೆಯಲ್ಲಿ ಸಾಕಷ್ಟು ನ್ಯೂನತೆಗಳು ಇವೆ, ಅದರಲ್ಲಿನ ಕೆಲವು ಅಂಶಗಳು ವಿವಾದವನ್ನು ಬಗೆಹರಿಸುವ ಬದಲಿಗೆ ಎರಡು ಕುಟುಂಬಗಳ ನಡುವೆ ದ್ವೇಷ ಹುಟ್ಟುಹಾಕುತ್ತದೆ. " ಬೆಂಗಳೂರಿನಲ್ಲಿ ಎ ಎನ್ ಐ ನ ಜತೆ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.