ಪಂಜಾಬ್, ಗೋವಾ ಚುನಾವಣೆ: ಫೆ.3, 4ರಂದು ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಕ್ಕೆ ನಿರ್ಬಂಧ

ಮುಂಬರುವ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಯಾವುದೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ:  ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಘಟನೆಗಳು ಅಥವಾ ವ್ಯಕ್ತಿ ಫೆಬ್ರವರಿ 3 ಮತ್ತು 4ರಂದು ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳನ್ನು ಪ್ರಕಟಿಸಬಾರದೆಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿ(ಎಂಸಿಎಂಸಿ)ಯಿಂದ ಪೂರ್ವ ಪ್ರಮಾಣಿತ ಪಡೆದ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಬಹುದೆಂದು ಹೇಳಿದೆ.
ಈ ಹಿಂದೆ ಇಂತಹ ಅನೇಕ ಜಾಹೀರಾತುಗಳು ಜನರನ್ನು ತಪ್ಪು ದಾರಿಗೆಳೆಯುವುದು ಚುನಾವಣಾ ಆಯೋಗದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಆದೇಶ ನೀಡಿದೆ.
ಆಯೋಗ ಗೋವಾ ಮತ್ತು ಪಂಜಾಬ್ ನ ಎಲ್ಲಾ ಪತ್ರಿಕೆಗಳಿಗೂ ಇಂತಹದೇ ಆದೇಶ ಹೊರಡಿಸಿ, ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿಯಿಂದ ಪೂರ್ವ ಪ್ರಮಾಣಿತ ಪಡೆಯದ ಯಾವುದೇ ಜಾಹೀರಾತುಗಳನ್ನು ಫೆಬ್ರವರಿ 3 ಮತ್ತು 4ರಂದು ಪ್ರಕಟಿಸದಂತೆ ಹೇಳಿದೆ.
ಪೂರ್ವ ಪ್ರಮಾಣಿತ ಪಡೆದುಕೊಳ್ಳಬಯಸುವ ಜಾಹೀರಾತುಗಳನ್ನು ಪರೀಕ್ಷಿಸಿ ಅನುಮತಿ ನೀಡಬೇಕೆಂದು ಕೂಡ ಚುನಾವಣಾ ಆಯೋಗ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com