ಲಾಲ್ ದರ್ವಾಜಾ ಪ್ರದೇಶದ ನಿವಾಸಿಗಳು ಮಾರ್ವಾಡಿ ವಿರುದ್ಧ ದೂರು ನೀಡಿದ್ದರು. ಆತ ಪಾನಿಪೂರಿ ನೀರಿಗೆ ಶೌಚಾಲಯ ಕ್ಲೀನರ್ ಮಿಶ್ರಣ ಮಾಡುತ್ತಿರುವುದಾಗಿ ದೂರು ನೀಡಿದ್ದರು. ಈ ದೂರಿನ ಅನ್ವಯ ಮಾರ್ವಾಡಿ ವಿರುದ್ಧ ದೂರು ದಾಖಲಿಸಿದ್ದ ಎಎಂಸಿ ಪಾನಿಪೂರಿ ನೀರಿನ ಮಾದರಿಗಳನ್ನು ಆಹಾರ ಪರೀಕ್ಷೆ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಪರೀಕ್ಷೆಯಿಂದ ಆಘಾತಕಾರಿ ವಿಷಯವೊಂದು ತಿಳಿದುಬಂದಿದ್ದು, ಮಾರ್ವಾಡಿ ಪಾನಿಪೂರಿ ನೀರಿನ ಜತೆ ಆಕ್ಸಾಲಿಕ್ ಆಸೀಡ್ ಮಿಶ್ರಣ ಮಾಡಿರುವುದು ಬೆಳಕಿಗೆ ಬಂದಿತ್ತು.