ಗುರು ರವಿದಾಸರ ತತ್ವಗಳು ಸಮಾಜದ ಮೇಲೆ ಗಾಢ ಪ್ರಭಾವ ಬೀರಿದೆ: ಪ್ರಧಾನಿ ಮೋದಿ

ಗುರು ರವಿದಾಸ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತದ ಅತೀಂದ್ರಿಯ ಕವಿ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಗುರು ರವಿದಾಸ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತದ ಅತೀಂದ್ರಿಯ ಕವಿ ಮತ್ತು ಸಂತನ ತತ್ವ ಮತ್ತು ಆಲೋಚನೆಗಳು ಸಮಾಜದ ಮೇಲೆ ಗಾಢ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
ಗುರು ರವಿದಾಸ ಅವರ ಜಯಂತಿ ಅಂಗವಾಗಿ ಅವರಿಗೆ ವಂದನೆ ಸಲ್ಲಿಸುತ್ತೇನೆ. ಅವರ ನಿಷ್ಕಲ್ಮಷ ಆಲೋಚನೆ ಮತ್ತು ತತ್ವಗಳು ಸಮಾಜದ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
 ಗುರುದಾಸ ಅವರು ಸಾಮರಸ್ಯ, ಸಮಾನತೆ ಮತ್ತು ಸಹಾನುಭೂತಿ ದೇಶದ ಸಂಸ್ಕೃತಿಗೆ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ರವಿದಾಸ್ ಅವರು ಉತ್ತರ ಭಾರತದ ಭಕ್ತಿ ಚಳವಳಿಯ ಅತೀಂದ್ರಿಯ ಕವಿ ಸಂತರಾಗಿದ್ದರು. ಅವರ ಭಕ್ತಿಗೀತೆಗಳು ಚಳವಳಿ ಮೇಲೆ ಗಾಢ ಪ್ರಭಾವ ಬೀರಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com