ದಿನಗೂಲಿ ಕಾರ್ಮಿಕನಾಗಿರುವ ಗೆದೆಲಾ ಹರಿಕೃಷ್ಣ ಹಾಗೂ ಅವರ ಸಹೋದರ ಸಂಬಂಧಿ ಬಿಎಸ್ಎಫ್ ನಲ್ಲಿ ಕೆಲಸ ಮಾಡುತ್ತಿದ್ದ ಗೆದೆಲಾ ಸುರ್ಯನಾರಾಯಣ್ ಮಧ್ಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಸೂರ್ಯನಾಯರಾಣ ಹರಿಕೃಷ್ಣ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಕುತ್ತಿಗೆಗೆ ತಗುಲಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ಅಮದಲವಲಸ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಅವರು ತಿಳಿಸಿದ್ದಾರೆ.