ಸ್ವಾಮಿ ದಯಾನಂದ ಸರಸ್ವತಿಯವರ ಸಾಮಾಜಿಕ ಸುಧಾರಣೆಗೆ ಉದಾತ್ತ ಪ್ರಯತ್ನಗಳು ಶಾಶ್ವತ ಪ್ರಭಾವ ಬೀರಿದೆ: ಪ್ರಧಾನಿ

ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಅವರ 193ನೇ ಜಯಂತಿ ಅಂಗವಾಗಿ ಗೌರವ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಅವರ 193ನೇ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಮಾಜ ಸುಧಾರಣೆಗೆ ಮತ್ತು ಶಿಕ್ಷಣಕ್ಕೆ ದಯಾನಂದ ಸರಸ್ವತಿ ಸ್ವಾಮಿಗಳ ಉದಾತ್ತ ಪ್ರಯತ್ನಗಳು ಶಾಶ್ವತ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
ಸ್ವಾಮಿ ದಯಾನಂದ ಸರಸ್ವತಿ ಅವರ ಜಯಂತಿ ಸಂದರ್ಭದಲ್ಲಿ ಅವರಿಗೆ ಗೌರವ ನಮನಗಳು. ಸಮಾಜ ಸುಧಾರಣೆಗೆ ಮತ್ತು ಶಿಕ್ಷಣಕ್ಕೆ ಅವರ ಕೊಡುಗೆ ಅಪಾರ, ಇಂದಿಗೂ ಅದು ಸಮಾಜದ ಮೇಲೆ ಗಾಢ ಪರಿಣಾಮ ಉಂಟುಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸ್ವಾಮಿ ದಯಾನಂದ ಸರಸ್ವತಿಯವರು ಪ್ರಖ್ಯಾತ ಪಂಡಿತರಾಗಿದ್ದು,  ವೇದ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು.
1876ರಲ್ಲಿ ಭಾರತೀಯರು ಭಾರತಕ್ಕೆ ಎಂದು ಸ್ವರಾಜ್ಯದ ಬಗ್ಗೆ ಕರೆ ನೀಡಿದ್ದರು. ನಂತರ ಲೋಕಮಾನ್ಯ ತಿಲಕರು ಕರೆ ಕೊಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com