ನಮ್ಮ ಮೇಲೆ ಪರ್ಯಾಲೋಚನೆಗೆ ಬರುವ ವಿಷಯಗಳನ್ನು ನೀವು ಕುಳಿತು ಚರ್ಚೆ ಮಾಡಿ ತೀರ್ಮಾನಿಸಿ, ನ್ಯಾಯಾಲಯದ ಪರಿಗಣನೆಗೆ ಯಾವ ವಿಚಾರಗಳು ಬರುತ್ತವೆ ಎಂಬುದನ್ನು ನಾವು ತೀರ್ಮಾನಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ಮತ್ತು ಎನ್.ವಿ.ರಮಣ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಹೇಳಿದೆ.ನಿರ್ದಿಷ್ಟ ಕೇಸಿನ ವಾಸ್ತವಿಕ ಅಂಶಗಳನ್ನು ವ್ಯವಹರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಕಾನೂನಾತ್ಮಕ ಅಂಶಗಳನ್ನು ನಿರ್ಧರಿಸುತ್ತದೆ ಎಂದು ತಿಳಿಸಿದೆ.