ಕುಪ್ವಾರ ಬಂಡಿಪೋರಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ 4 ಯೋಧರು ಹುತಾತ್ಮರಾಗಿದ್ದರು. ಕಣಿವೆಯಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿಗಳು, ಹಾಗೂ ಇನ್ನಿತರ ಸಿಬ್ಬಂದಿಗಳೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಜೆಎಸ್ ಸಂಧು ಹುತಾತ್ಮ ಯೋಧರಾದ ಮೇಜರ್ ಸತೀಶ್ ದಹಿಯಾ, ರೈಫಲ್ ಮೆನ್ ರವಿ ಕುಮಾರ್, ಪಾರಾಟ್ರೂಪರ್ ಧರ್ಮೇಂದ್ರ ಕುಮಾರ್ ಹಾಗೂ ಅಶುತೋಶ್ ಕುಮಾರ್ ಗೆ ಗೌರವ ನಮನ ಸಲ್ಲಿಸಿದ್ದಾರೆ.