ಡ್ಯಾನ್ಸ್ ಮಾಡಲು ನಿರಾಕರಿಸಿದ ಸ್ನೇಹಿತನನ್ನು ಕೊಂದ ಗೆಳೆಯ

ಹುಟ್ಟುಹಬ್ಬ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ನಿರಾಕರಿಸಿದ ತನ್ನ ಸ್ನೇಹಿತನನ್ನೇ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಮುಂಬಯಿಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ಹುಟ್ಟುಹಬ್ಬ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ನಿರಾಕರಿಸಿದ ತನ್ನ ಸ್ನೇಹಿತನನ್ನೇ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಕೇತನ್ ಶಿರ್ವಾಡ್ಕರ್ ಎಂಬಾತನ ಹುಟ್ಟುಹಬ್ಬದ ಪಾರ್ಟಿ ಇತ್ತು. ಪಾರ್ಟಿಗೆ ಸ್ನೇಹಿತರು ಆಗಮಿಸಿದ್ದರು. ಅನುಷ್ಕ್ ಜಾದವ್ ಎಂಬ ಸ್ನೇಹಿತನು ಬಂದಿದ್ದ, ಈ ವೇಳೆ ಹಾಡು ಹಾಕಿದ ಕೇತನ್ ಡ್ಯಾನ್ಸ್ ಮಾಡುವಂತೆ ಅನುಷ್ಕ್ ಜಾದವ್ ಗೆ ಹೇಳಿದ್ದಾನೆ, ಆದರೆ ಡ್ಯಾನ್ಸ್ ಮಾಡಲು ಜಾದವ್ ನಿರಾಕರಿಸಿದ್ದಾನೆ.

ಇಬ್ಬರು ಕೂಡ ಕುಡಿತ ಮತ್ತಿನಲ್ಲಿದ್ದರು. ಈ ವೇಳೆ ಪರಸ್ಪರ ಜಗಳ ಮಾಡಿಕೊಂಡು ಒಬ್ಬರನ್ನೊಬ್ಬರು ಥಳಿಸಿದ್ದಾರೆ. ಅಲ್ಲಿದ್ದ ಬೇರೆ ಸ್ನೇಹಿತರು ಜಗಳ ಬಿಡಿಸಲು ಯತ್ನಿಸಿ ಇಬ್ಬರನ್ನು ಬೇರ್ಪಡಿಸಿದ್ದರು. ಈ ವೇಳೆ ಕೇತನ್ ಮರದ ಹಲಗೆಯಿಂದ ಜಾದವ್ ತಲೆಗೆ ಹೊಡೆದಿದ್ದಾನೆ.

ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಜಾಧವ್ ಸಾವನ್ನಪ್ಪಿದ್ದಾನೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ಕೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com