ಶಶಿಕಲಾ, ಸುಧಾಕರನ್ ಮತ್ತು ಇಳವರಸಿಯವರು ತಮಗೆ ವೈಯಕ್ತಿಕ ಆದಾಯ ಮೂಲವಿದೆ ಎಂದು ಹೇಳಿದರೂ ಕೂಡ, ವಾಸ್ತವವಾಗಿ ನೋಡಿದರೆ ಕಂಪೆನಿಗಳ ಸ್ಥಾಪನೆ ಮತ್ತು ಅಧಿಕ ಪ್ರಮಾಣದಲ್ಲಿ ಭೂಮಿ ಖರೀದಿ ಮಾಡಿದ್ದು ನೋಡಿದರೆ ಎಲ್ಲಾ ಅಪರಾಧಿಗಳು ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸದಲ್ಲಿ ಇದ್ದು ಸಂಚು ರೂಪಿಸಿದ್ದಾರೆ ಎಂದು ಗೊತ್ತಾಗುತ್ತದೆ. ಸಾಮಾಜಿಕವಾಗಿ ಅವರು ಒಟ್ಟಿಗೆ ವಾಸಿಸುತ್ತಿರಲಿಲ್ಲ ಅಥವಾ ಮಾನವೀಯ ನೆಲೆಯಲ್ಲಿ ಅವರಿಗೆ ಉಚಿತ ವಸತಿ ನೀಡಿರುವುದು ಕೂಡ ಕಂಡುಬರುತ್ತಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.