ರಾಮಜಾಸ್ ಕಾಲೇಜಿನಲ್ಲಿ ನಡೆದಿರುವ ಘರ್ಷಣೆಯನ್ನು ಸಿಪಿಐ-ಎಂ ಖಂಡಿಸುತ್ತದೆ. ಇದು ಸರ್ಕಾರಿ ಪ್ರಾಯೋಜಿತ ಅಸಹಿಷ್ಣುತೆಗೆ ಮತ್ತೊಂದು ಅತ್ಯುತ್ತಮ ಉದಾಹರಣೆ ಎಂದು ಸಿಪಿಐ-ಎಂ ಆರೋಪಿಸಿದೆ. ದೆಹಲಿ ಪೊಲೀಸಲು ಘರ್ಷಣೆ ನಡೆಯಲು ಅವಕಾಶ ನೀಡಿ ನಾಚಿಕೆಗೇಡಿನ ಕ್ರಮ ಅನುಸರಿಸಿದ್ದಾರೆ. ಪೊಲೀಸ್ ಠಾಣೆಗೆ ಹೋದ ಪ್ರಾಧ್ಯಾಪಕರ ಮೇಲೂ ಸಹ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಿಪಿಐ-ಎಂ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ.