ಶಿಲ್ಪಿಗೆ ಇದು ಕನಸೋ, ನನಸೋ ಎಂದು ಒಂದು ಕ್ಷಣ ನಂಬಲು ಅಸಾಧ್ಯವಾಯಿತು. ಆದಿಯೋಗಿ ಹಾಗೂ ಆಧುನಿಕ ಭಾರತದ ಕರ್ಮಯೋಗಿಯ ಆಶೀರ್ವಾದ ಪಡೆದದ್ದು ತುಂಬಾ ಖುಷಿಯಾಗುತ್ತಿದೆ. ದೇಶದ ಪ್ರಧಾನಿಯಾದರೂ ಕೂಡ ಪ್ರತಿನಿತ್ಯ ನಮ್ಮಂತಹ ಕೋಟ್ಯಂತರ ಸಾಮಾನ್ಯ ಜನರ ಆಸೆ, ಆಕಾಂಕ್ಷೆಗಳನ್ನು ನರೇಂದ್ರ ಮೋದಿಯವರು ಆಲಿಸುತ್ತಾರೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಶಿಲ್ಪಿ ತಿವಾರಿ ಟ್ವೀಟ್ ಮಾಡಿದ್ದಾಳೆ.