ಕಳೆದ ನವೆಂಬರ್ ನಲ್ಲಿ ಜಲ್ಪಾಯ್ ಗುರಿಯ ಅನಾಥ ಮಕ್ಕಳ ವಸತಿ ನಿಲಯದ ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ. ಕಳ್ಳ ಸಾಗಾಣೆ ಮಾಡಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಕಳೆದ ಕೆಲವು ದಿನಗಳಿಂದ ಜೂಹಿ ಚೌಧರಿ ವಿರುದ್ಧ ಮಕ್ಕಳ ಸಾಗಣೆ ಆರೋಪ ಕೇಳಿಬಂದಿತ್ತು. ವಸತಿ ನಿಲಯದ ಮುಖ್ಯಸ್ಥ ಚಂದನ್ ಚಕ್ರವರ್ತಿ ಎಂಬುವರನ್ನು ಬಂಧಿಸಿ ಸಿಐಡಿ ಪೊಲೀಸರು ವಿಚಾರಣೆ ನಡೆಸಿದಾಗ ಜೂಹಿ ಹೆಸರನ್ನು ಆತ ಬಾಯ್ಬಿಟ್ಟಿದ್ದ