ಪೋಸ್ಟರ್ಗಳಲ್ಲಿ ಕೃಷ್ಣನಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅರ್ಜುನನಾಗಿ ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಬಿಂಬಿಸಲಾಗಿದ್ದು, ಕಾಂಗ್ರೆಸ್ ಮತ್ತು ಎಸ್ಪಿ ನಡುವಿನ ಮೈತ್ರಿ ಬಹುತೇಕ ಖಚಿತ ಎನ್ನಲಾಗಿದೆ. ಪೋಸ್ಟರ್ನಲ್ಲಿ ಎಸ್ಪಿ ಚಿಹ್ನೆ ಸೈಕಲ್ ಬಳಸಲಾಗಿದೆ. ವಿಕಾಸ ಮತ್ತು ವಿಜಯದ ಹಾದಿಯಲ್ಲಿ ಇಬ್ಬರು ಮಹಾರಥಿಗಳು ಮುನ್ನುಗ್ಗುತ್ತಿದ್ದಾರೆ ಎಂಬ ಘೊಷವಾಕ್ಯವನ್ನು ಬಳಸಲಾಗಿದೆ.