ವಾರಣಾಸಿ ಪೋಸ್ಟರ್​ಗಳಲ್ಲಿ ಕೃಷ್ಣಾರ್ಜುನರಾಗಿ ರಾಹುಲ್, ಅಖಿಲೇಶ್ ಪ್ರತ್ಯಕ್ಷ!

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಆಡಳಿತರೂಢ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಒಲವು...
ಅಖಿಲೇಶ್ ಯಾದವ್ - ರಾಹುಲ್ ಗಾಂಧಿ
ಅಖಿಲೇಶ್ ಯಾದವ್ - ರಾಹುಲ್ ಗಾಂಧಿ
Updated on
ವಾರಣಾಸಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಆಡಳಿತರೂಢ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಒಲವು ತೋರಿರುವ ಬೆನ್ನಲ್ಲೇ ವಾರಣಾಸಿಯ ಹಲವು ಕಡೆ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೃಷ್ಣಾರ್ಜುನರಾಗಿ ರಥದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್​ಗಳ ರಾರಾಜಿಸುತ್ತಿದೆ.
ಪೋಸ್ಟರ್​ಗಳಲ್ಲಿ ಕೃಷ್ಣನಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅರ್ಜುನನಾಗಿ ಎಸ್​ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಬಿಂಬಿಸಲಾಗಿದ್ದು, ಕಾಂಗ್ರೆಸ್ ಮತ್ತು ಎಸ್​ಪಿ ನಡುವಿನ ಮೈತ್ರಿ ಬಹುತೇಕ ಖಚಿತ ಎನ್ನಲಾಗಿದೆ. ಪೋಸ್ಟರ್​ನಲ್ಲಿ ಎಸ್​ಪಿ ಚಿಹ್ನೆ ಸೈಕಲ್ ಬಳಸಲಾಗಿದೆ. ವಿಕಾಸ ಮತ್ತು ವಿಜಯದ ಹಾದಿಯಲ್ಲಿ ಇಬ್ಬರು ಮಹಾರಥಿಗಳು ಮುನ್ನುಗ್ಗುತ್ತಿದ್ದಾರೆ ಎಂಬ ಘೊಷವಾಕ್ಯವನ್ನು ಬಳಸಲಾಗಿದೆ.
ಈಗಾಗಲೇ ಕಾಂಗ್ರೆಸ್ ಮುಖ್ಯಮಂತ್ರಿಯಾಗಬೇಕಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಂಪೂರ್ಣವಾಗಿ ಅಖಿಲೇಶ್​ಗೆ ಸಹಮತ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ವಿರುದ್ಧ ಸೈಕಲ್ ಚಿಹ್ನೆಗಾಗಿ ಪೈಪೋಟಿ ನಡೆಸಿ ಗೆದ್ದಿದ್ದ ಅಖಿಲೇಶ್ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧಿಸುವತ್ತ ಹೆಜ್ಜೆ ಇರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com