ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಲಿದ್ದಾರೆ ಅಬುದಾಬಿ ಯುವರಾಜ

ಅಬುದಾಬಿ ಯುವರಾಜ ಹಾಗೂ ಯುನೈಟೆಡ್ ಅರಬ್ ಸಶಸ್ತ್ರ ಪಡೆ ಸರ್ವೋಚ್ಚ ಕಮಾಂಡರ್ ಶೇಕ್ ಮೊಹಮದ್ ಜಾಯೇದ್ ಅಲ್ ನಹಾನ್ ಜನವರಿ 26 ಗಣರಾಜ್ಯೋತ್ಸವ ...
ಅಬುದಾಬಿ ಯುವರಾಜ
ಅಬುದಾಬಿ ಯುವರಾಜ

ನವದೆಹಲಿ: ಅಬುದಾಬಿ ಯುವರಾಜ ಹಾಗೂ ಯುನೈಟೆಡ್ ಅರಬ್ ಸಶಸ್ತ್ರ ಪಡೆ ಸರ್ವೋಚ್ಚ ಕಮಾಂಡರ್ ಶೇಕ್ ಮೊಹಮದ್ ಜಾಯೇದ್ ಅಲ್ ನಹಾನ್ ಜನವರಿ 26 ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಲಿದ್ದಾರೆ.

ಮೂರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸುವ ಅಬುದಾಬಿ ಯುವಾರಾಜ ಗಣ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವರಾಜನನ್ನು ನಾಳೆ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತವಾಗಿ ಸ್ವಾಗತಿಸಲಾಗುವುದು. ನಂತರ ರಾಜಘಾಟ್ ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಪುಷ್ಪಗುಚ್ಚ ಸಮರ್ಪಿಸಲಿದ್ದಾರೆ.

ನಾಳೆ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ನಂತರ ಸಂಜೆ ಲೀಲಾ ಪ್ಯಾಲೇಸ್ ಹೊಟೆಲ್ ನಲ್ಲಿ ಉಪ ರಾಷ್ಟ್ರಪತಿ ಅಮಿದ್ ಹನ್ಸಾರಿ ಅವರನ್ನು ಭೇಟಿ ಮಾಡಲಿದ್ದಾರೆ. ಗುರುವಾರ ನಡೆಯುವ ಗಣ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಜನವರಿ 26 ರಂದು ಅಬುದಾಬಿಗೆ ಪಯಣ ಬೆಳೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com