ಭಾರತಾಂಬೆಯ ಮುಂದೆ ನಾವೆಲ್ಲಾ ಮಕ್ಕಳೂ ಸಮಾನರು. ನಾವು ಯಾವ ಧರ್ಮ, ಜಾತಿಯಲ್ಲಿರಲಿ ಭಾರತದ ಏಳಿಗೆಗೆ ಒಟ್ಟಾಗಿ ದೇಶದ ಏಕತೆ, ಸಮಗ್ರತೆಗೆ ಹೋರಾಡಬೇಕಿದೆ. ನಮ್ಮ ದೇಶ ಸರಿಯಾದ ವಿಷಯಕ್ಕೆ ವಾದಿಸುವ ಭಾರತೀಯನನ್ನು ಬಯಸುತ್ತದೆಯೇ ಹೊರತು ಅಸಹಿಷ್ಣುತೆಯ ಭಾರತೀಯನನ್ನಲ್ಲ. ಸಹಿಷ್ಣುತೆ, ತಾಳ್ಮೆ ಮತ್ತು ಉತ್ತಮ ಮನಸ್ಸು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.