ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹುತಾತ್ಮರಾದ 20 ಯೋಧರಿಗೆ ಭಾರತೀಯ ಸೇನೆ ಅಂತಿಮ ನಮನ ಸಲ್ಲಿಸಿತು. .ಶ್ರೀನಗರದಿಂದ ದೆಹಲಿಯ ಪಾಲಂ ಏರ್ ಬೇಸ್ ಗೆ ಯೋಧರ ಪಾರ್ಥಿವ ಶರೀರಗಳನ್ನು ರವಾನಿಸಲಾಗಿತ್ತು. ಇದೀಗ ಪಾಲಂ ಏರ್ ಬೇಸ್ ನಲ್ಲಿ ಹುತಾತ್ಮ ಯೋಧರಿಗೆ ಭಾರತೀಯ ಸೇನೆ ಅಂತಿಮ ನಮನ ಸಲ್ಲಿಸಿತು. .ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಗಣ್ಯರು ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು. .ಹುತಾತ್ಮ ಯೋಧರ ಪೈಕಿ ಕರ್ನಾಟಕ ಹಾಸನ ಜಿಲ್ಲೆಯ ದೇವಿಹಳ್ಳಿಯ ಸಂದೀಪ್ ಕುಮಾರ್ ಎಂಬುವರ ಸಹ ಹುತಾತ್ಮರಾಗಿದ್ದರು. .Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos