ಮುಲಾಯಂ ಸಿಂಗ್ ಯಾದವ್ ಅವರು ರಾಜ್ಯ ಸರ್ಕಾರದ ಕಾರನ್ನು ಬಳಸುತ್ತಿರುವುದರಿಂದ ಅದನ್ನು ಹಿಂತಿರುಗಿಸಲು ಹೇಳುವಂತೆ ಕೆಲವರು ಮುಖ್ಯಮಂತ್ರಿ ಕಿವಿಯಲ್ಲಿ ಊದಿದರಂತೆ. ಆದರೆ ಅವರ ಬಾಯಿ ಮುಚ್ಚಿಸಿದ ಯೋಗಿ ಆದಿತ್ಯನಾಥ್, ಅವರೇ ಮನಸ್ಸು ಮಾಡಿ ಕಾರನ್ನು ಹಿಂತಿರುಗಿಸುವುದಾದರೆ ಹಿಂತಿರುಗಿಸಲಿ, ಕೇಳಲು ಹೋಗಬೇಡಿ ಎಂದಿದ್ದಾರಂತೆ.