ನನ್ನ ಹೋರಾಟ ಬಿಜೆಪಿ ಸಿದ್ಧಾಂತದ ವಿರುದ್ಧವೇ ಹೊರತು ಕೊವಿಂದ್ ವಿರುದ್ಧವಲ್ಲ: ಮೀರಾ ಕುಮಾರ್

ನನ್ನ ಹೋರಾಟ ಭಾರತೀಯ ಜನತಾಪಕ್ಷ(ಬಿಜೆಪಿ)ದ ಸಿದ್ಧಾಂತದ ವಿರುದ್ಧವೇ ಹೊರತು ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೊವಿಂದ್ ವಿರುದ್ಧ ಅಲ್ಲ ಎಂದು...
ರಾಮನಾಥ್, ಕೊವಿಂದ್, ಮೀರಾ ಕುಮಾರ್
ರಾಮನಾಥ್, ಕೊವಿಂದ್, ಮೀರಾ ಕುಮಾರ್
ಚಂಡಿಘಡ್: ನನ್ನ ಹೋರಾಟ ಭಾರತೀಯ ಜನತಾಪಕ್ಷ(ಬಿಜೆಪಿ)ದ ಸಿದ್ಧಾಂತದ ವಿರುದ್ಧವೇ ಹೊರತು ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೊವಿಂದ್ ವಿರುದ್ಧ ಅಲ್ಲ ಎಂದು ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮೀರಾ ಕುಮಾರ್ ಹೇಳಿದ್ದಾರೆ. 
ರಾಮನಾಥ್ ಕೊವಿಂದ್ ಅವರ ಬಗ್ಗೆ ನನಗೆ ಗೌರವವಿದೆ. ನನ್ನ ಹೋರಾಟ ಬಿಜೆಪಿ ಸಿದ್ಧಾಂತದ ವಿರುದ್ಧವೇ ಹೊರತು ಕೊವಿಂದ್ ಅವರ ವಿರುದ್ಧ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 
ರಾಷ್ಟ್ರಪತಿ ಚುನಾವಣೆಗೆ ಇಬ್ಬರು ದಲಿತರು ನಿಂತಿರುವುದರಿಂದ ಆಧುನಿಕ ಭಾರತದಲ್ಲಿ ಜಾತಿಯ ಬಗ್ಗೆ ಮಾತ್ರ ಮಾತನಾಡಲಾಗುತ್ತಿದ್ದು ಇದು ನನ್ನ ಮನಸ್ಸಿಗೆ ತೀವ್ರ ನೋವನ್ನು ಉಂಟು ಮಾಡಿದೆ ಎಂದು ಮೀರಾ ಕುಮಾರ್ ಹೇಳಿದ್ದಾರೆ. 
ಈ ಹಿಂದಿನ ಚುನಾವಣೆಯಲ್ಲಿ ಬೇರೆ ಜಾತಿಯ ವ್ಯಕ್ತಿಗಳು ನಿಂತಿದ್ದಾಗ ಅಂದು ಯಾರು ಜಾತಿಯ ಬಗ್ಗೆ ಮಾತನಾಡಿರಲಿಲ್ಲ ಆಗ ಅವರ ಗುಣಗಳು, ಪ್ರತಿಭೆ, ಸಾಧನೆಗಳು ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಆದರೆ ಇದೀಗ ದಲಿತರಿಬ್ಬರು ರಾಷ್ಟ್ರಪತಿ ಚುನಾವಣೆಗೆ ನಿಂತಿರುವುದು ಜಾತಿ ರಾಜಕಾರಣಕ್ಕೆ ಕಾರಣವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com