ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ನಿಷೇಧ ಹಿಂಪಡೆದ ಇಂಡಿಗೊ

ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ್ದಕ್ಕಾಗಿ ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ಅವರಿಗೆ ವಿಧಿಸಿದ್ದ ....
ದಿವಾಕರ್ ರೆಡ್ಡಿ
ದಿವಾಕರ್ ರೆಡ್ಡಿ
ನವದೆಹಲಿ: ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ್ದಕ್ಕಾಗಿ ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ಅವರಿಗೆ ವಿಧಿಸಿದ್ದ ನಿಷೇಧವನ್ನು ಬುಧವಾರ ಇಂಡಿಗೊ ವಿಮಾನಯಾನ ಸಂಸ್ಥೆ ಹಿಂಪಡೆದಿದೆ.
ಜೂನ್‌ 15ರಂದು ದಿವಾಕರ್‌ ರೆಡ್ಡಿ ಅವರು ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಸಂಸ್ಥೆಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಕಾರಣಕ್ಕೆ ದಿವಾಕರ್ ರೆಡ್ಡಿ ಅವರ ವಿಮಾನ ಪ್ರಯಾಣದ ಮೇಲೆ ಇಂಡಿಗೊ ಸೇರಿದಂತೆ ಹಲವು ನಾಗರಿಕ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದವು.
ದಿವಾಕರ್‌ ರೆಡ್ಡಿ ಅವರ ವಿಮಾನ ಪ್ರಮಾಣ ನಿಷೇಧ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಸಂಸದ ವೈ.ಎಸ್‌. ಚೌಧರಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಇಂಡಿಗೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಔತಣಕೂಟದಲ್ಲಿ ದಿವಾಕರ್‌ ರೆಡ್ಡಿ ಮತ್ತು ಇಂಡಿಗೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾತುಕತೆ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. 
ದಿವಾಕರ್‌ ರೆಡ್ಡಿ ಅವರ ವಿಮಾನ ಪ್ರಮಾಣದ ಮೇಲಿನ ನಿಷೇಧವನ್ನು ವಾಪಸ್‌ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿರುವ ಇಂಡಿಗೋ, ಈ ವಿಷಯವನ್ನು ಭಾರತೀಯ ವಿಮಾನಯಾನ ಸಂಸ್ಥೆಗಳ ಸಂಘಟನೆಯ (ಎಫ್‌ಐಎ) ಗಮನಕ್ಕೂ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com