ನವದೆಹಲಿ: ಸಂಸತ್ತಿನ ಕ್ಯಾಂಟೀನ್ ನಲ್ಲಿ ನಿನ್ನೆ ಮಧ್ಯಾಹ್ನ ಊಟ ಮಾಡಿದ ಲೋಕಸಭೆ ವರದಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಸೌಖ್ಯಕ್ಕೀಡಾಗಿದ್ದಾರೆ. ಅವರಿಗೆ ಊಟದಲ್ಲಿ ಒಂದು ಜೇಡಹುಳ ಬಿದ್ದು ಸಿಕ್ಕಿತ್ತು.
ಶ್ರೀನಿವಾಸನ್ ಎಂಬ ಅಧಿಕಾರಿ, ಊಟದ ಕೆಲ ತುತ್ತುಗಳನ್ನು ಸೇವಿಸಿದ ನಂತರ ನನಗೆ ವಾಂತಿ ಬರಲು ಆರಂಭವಾಯಿತು. ನಂತರ ಊಟದಲ್ಲಿ ಜೇಡಹುಳ ಕಾಣಿಸಿತು. ತಕ್ಷಣವೇ ಕ್ಯಾಂಟೀನ್ ಸಿಬ್ಬಂದಿಗೆ ದೂರು ನೀಡಿದೆ ಎಂದರು.
ಶ್ರೀನಿವಾಸನ್ ಊಟಕ್ಕೆ ಪೊಂಗಲ್ ಮತ್ತು ಮೊಸರನ್ನ ತೆಗೆದುಕೊಂಡಿದ್ದರು.