ಸೆಪ್ಟೆಂಬರ್ ನಿಂದ ಪ್ರತಿ ತಿಂಗಳು 18ರಂದು ಸ್ವಯಂಸೇವಕರ ಸಭೆ: ಮಾಯಾವತಿ

ಉತ್ತರ ಪ್ರದೇಶದ 18 ವಿಭಾಗಗಳಲ್ಲಿ ಸೆಪ್ಟೆಂಬರ್ 18ರಂದು ಸಭೆ ಸೇರುವ ಮೂಲಕ ಪ್ರತಿ ತಿಂಗಳು 18ನೇ...
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ
ನವದೆಹಲಿ: ಉತ್ತರ ಪ್ರದೇಶದ 18 ವಿಭಾಗಗಳಲ್ಲಿ ಸೆಪ್ಟೆಂಬರ್ 18ರಂದು ಸಭೆ ಸೇರುವ ಮೂಲಕ ಪ್ರತಿ ತಿಂಗಳು 18ನೇ ತಾರೀಖಿನಂದು  ಸ್ವಯಂಸೇವಕರ  ಸಭೆ ನಡೆಸಲಾಗುವುದು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 18ನೇ ತಾರೀಖಿನಂದು ತಾವು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದು ಆ ದಿನವನ್ನು ಪಕ್ಷದ ಕಾರ್ಯಕರ್ತರು ಮರೆಯಲು ಸಾಧ್ಯವಿಲ್ಲ.ಹೀಗಾಗಿ ಆ ತಾರೀಖನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದರು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ದಿನದಂದು ಪ್ರತಿ ಪ್ರದೇಶದಲ್ಲಿ ವಿವಿಧ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಲಾಗುವುದು. ಮೊದಲ ರ್ಯಾಲಿಯನ್ನು ಮೀರತ್-ಸಹರಾನ್ ಪುರದಲ್ಲಿ ನಡೆಸಲಾಗುವುದು. ಮುಂದಿನ ವರ್ಷ ಜೂನ್ ನಂತರ ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದು ಹೇಳಿದರು.
ಕಳೆದ ವಾರ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಮಾಯಾವತಿಯವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com