ನಿತೀಶ್ ಜಿಮ್ನಾಸ್ಟಿಕ್ಸ್: ಜೆಡಿಯು ನಾಯಕನ ನಡೆ ಬಗ್ಗೆ ಸ್ವಾಮಿ ಟ್ವೀಟ್

ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ನಿತೀಶ್ ಕುಮಾರ್ ರಾಜಕೀಯ ನಡೆಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿ
ಸುಬ್ರಹ್ಮಣಿಯನ್ ಸ್ವಾಮಿ
Updated on
ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ ಆರ್ ಜೆಡಿಯೊಂದಿಗಿನ ಮೈತ್ರಿ ತೊರೆದು ಬಿಜೆಪಿಯೊಂದಿಗೆ ಕೈ ಜೋಡಿಸಿ ಮತ್ತೆ ಸರ್ಕಾರ ರಚಿಸಿದ್ದಾರೆ. ಈ ನಡುವೆ ನಿತೀಶ್ ರಾಜಕೀಯ ನಡೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ನಿತೀಶ್ ಕುಮಾರ್ ರಾಜಕೀಯ ನಡೆಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. 
ನಿತೀಶ್ ಕುಮಾರ್ ತಮ್ಮ ರಾಜಕೀಯ ನಿಲುವುಗಳನ್ನು ಬದಲಾವಣೆ ಮಾಡಿಕೊಂಡಿರುವುದನ್ನು ಚಿತ್ರದ ಮೂಲಕ ಸುಬ್ರಹ್ಮಣಿಯನ್ ಸ್ವಾಮಿ ಪೋಸ್ಟ್ ಮಾಡಿದ್ದು, ನಿತೀಶ್ ಜಿಮ್ನಾಸ್ಟಿಕ್ಸ್ ಎಂದು ಹೆಸರು ನೀಡಿದ್ದಾರೆ. ನಿತೀಶ್ ಕುಮಾರ್ ಜಿಮ್ನಾಸ್ಟಿಕ್ಸ್ ಮಾಡುತ್ತಿರುವ ರೀತಿಯಲ್ಲೇ ಟ್ವೀಟ್ ಮಾಡಿರುವ ಚಿತ್ರದಲ್ಲಿದ್ದು, ರಾಜಕೀಯ ನಿರ್ಧಾರಗಳ ತಿರುವುಗಳನ್ನು ಸೂಚಿಸುವಂತಿದೆ. 
ಇದರಲ್ಲಿ ಮಹಾಘಟಬಂಧನ್ ಜೊತೆಗೆ ನಿತೀಶ್ ಕುಮಾರ್ ಕೈ ಜೋಡಿಸಿದ್ದು ಹಾಗೂ ಈಗ ಮಹಾಮೈತ್ರಿಯನ್ನು ತೊರೆದು ಹೊರಬಂದಿದ್ದರ ಬಗ್ಗೆ ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com