ನವದೆಹಲಿ: ರಷ್ಯಾದ ಪಾನಮತ್ತ ಪ್ರಯಾಣಿಕನೋರ್ವ ಮಾರ್ಗ ಮಧ್ಯದಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ.
ವಿಮಾನದಲ್ಲಿದ್ದ ಪಾನಮತ್ತ ಪ್ರಯಾಣಿಕನನ್ನು ನಿಯಂತ್ರಿಸಲು ವಿಮಾನದ ಪೈಲಟ್ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ನ ಸಿಬ್ಬಂದಿಗಳ ಸಹಾಯ ಪಡೆದಿದ್ದು, ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಸಿಐಎಸ್ಎಫ್ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಾಸ್ಕೋದಿಂದ ನವದೆಹಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನದ ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕನ ವರ್ತನೆಯಿಂದ ಕೆಲಕಾಲ ಉಳಿದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಮೇ.22 ರಂದು ಈ ಘಟನೆ ನಡೆದಿದೆ.
ಭಾರತ-ರಷ್ಯಾಗಳಲ್ಲಿ ವಿಮಾನದಲ್ಲಿ ಕೇವಲ 30 ಎಂಜಿ ಗಳಷ್ಟು ಮದ್ಯ ಸೇವೆನಗೆ ಅನುಮತಿ ನೀಡಲಾಗಿದೆ. ಆದರೆ ಬಂಧಿತ ಪಾನಮತ್ತ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಆತನ ರಕ್ತದಲ್ಲಿನ ಮದ್ಯದ ಪ್ರಮಾಣ 56.7/100 ಎಂಎಲ್ ಗಳಿತ್ತು ಎಂದು ತಿಳಿದುಬಂದಿದೆ. ಪಾನಮತ್ತ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.