ನವದೆಹಲಿ: ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ನಡೆಸಿದ ವಿದ್ಯುನ್ಮಾನ ಮತಯಂತ್ರ ಹ್ಯಾಕಥಾನ್ ಸವಾಲಿನಲ್ಲಿ ಭಾಗವಹಿಸಿದ ಸಿಪಿಎಎಂ, ಸವಾಲಿನಲ್ಲಿ ಭಾಗವಹಿಸಲು ಇಷ್ಟವಿಲ್ಲ.ಬದಲಿಗೆ ವಿದ್ಯುನ್ಮಾನ ಮತಯಂತ್ರದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತದೆ ಎಂದು ಹೇಳಿತ್ತು. ಭಾಗವಹಿಸಿದ ಮತ್ತೊಂದು ಪಕ್ಷವಾದ ಎನ್ ಸಿಪಿ ತಂಡ ಕೂಡ ಶೈಕ್ಷಣಿಕ ತರಬೇತಿ ಭಾಗವಾಗಿ ಭಾಗವಹಿಸಿತ್ತಷ್ಟೇ ಹೊರತು ಸವಾಲುಗಳನ್ನು ಸ್ವೀಕರಿಸಲು ಅದಕ್ಕೆ ಆಸಕ್ತಿಯಿರಲಿಲ್ಲ ಎಂದು ಹೇಳಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ತಿಳಿಸಿದ್ದಾರೆ.