ರಾಜಸ್ಥಾನ: ಸರ್ಕಾರಗಳು ಆಕರ್ಷಕ ಟ್ಯಾಗ್ ಲೈನ್ ಗಳ ಅಡಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸುತ್ತವೆ. ರಾಜಕಾರಣಿಗಳು ಸ್ವತಃ ಅದರ ಅನುಭವ ಪಡೆದಾಗಲೇ ಸರ್ಕಾರದ ಯೋಜನೆ ಎಷ್ಟರ ಮಟ್ಟಿಗೆ ಜನರಿಗೆ ತಲುಪಿದೆ ಎಂಬುದು ತಿಳಿಯುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಬಲ್ಲ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಮೊಬೈಲ್ ನೆಟ್ವರ್ಕ್ ಸಿಗದೇ ಪರದಾಡಿದ ಕೇಂದ್ರ ಸಚಿವರು ಮರ ಹತ್ತಿದ ಘಟನೆ ನಡೆದಿದೆ.