ಬಿಹಾರದಲ್ಲಿ ಆಯೋಜಿಸಲಾಗಿದ್ದ ಬಾಬಾ ರಾಮ್ ದೇವ್ ಅವರ ಯೋಗ ಕ್ಯಾಂಪ್ ಗೆ ತೆರಳಿದ್ದ ರಾಧಾ ಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಕೇಂದ್ರ ಸಚಿವರು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಯೋಗಾಭ್ಯಾಸ ಮಾಡಿ ಎಂಬ ಉಚಿತ ಸಲಹೆ ನೀಡಿದ್ದಾರೆ. ಕೃಷಿ ಸಚಿವರ ಈ ಹೇಳಿಕೆ, ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಬಿಹಾರದ ಆಡಳಿತ ಪಕ್ಷಗಳಾದ ಜೆಡಿಯು, ಆರ್ ಜೆಡಿ ರಾಧಾ ಮೋಹನ್ ಸಿಂಗ್ ಅವರ ನಡೆಯನ್ನು ಖಂಡಿಸಿವೆ.