ಅರವಿಂದ್ ಸುಬ್ರಮಣಿಯನ್ ಅವರಿಂದ ಭಾರತೀಯ ಆರ್ಥಿಕತೆ ಬಗ್ಗೆ ಶೈಕ್ಷಣಿಕ ಕೋರ್ಸ್

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿಯಲ್ಲಿ ವಿತ್ತ ಸಚಿವಾಲಯ, ಭಾರತೀಯ ಆರ್ಥಿಕತೆಯ ಮೇಲೆ ಏಳು ದಿನಗಳ ಶಿಕ್ಷಣ ಕೋರ್ಸ್ ಅನ್ನು ಭಾನುವಾರ ಪ್ರಾರಂಭಿಸಿದೆ.
ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್
ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್
ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿಯಲ್ಲಿ ವಿತ್ತ ಸಚಿವಾಲಯ, ಭಾರತೀಯ ಆರ್ಥಿಕತೆಯ ಮೇಲೆ ಏಳು ದಿನಗಳ ಶಿಕ್ಷಣ ಕೋರ್ಸ್ ಅನ್ನು ಭಾನುವಾರ ಪ್ರಾರಂಭಿಸಿದೆ. ಇದನ್ನು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ನಡೆಸಿಕೊಡಲಿದ್ದಾರೆ. 
ಭಾರತೀಯ ಆರ್ಥಿಕತೆಯ ಅಭಿವೃದ್ಧಿ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಸಮಕಾಲೀನ ಚಿಂತನೆಗಳು ಎಂಬ ಈ ಕೋರ್ಸ್, ಆರ್ಥಿಕತೆಯಲ್ಲಿ ಆಗಿರುವ ಬದಲಾವಣೆಗಳ ಮೇಲೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಬೆಳಕು ಚೆಲ್ಲಲಿದೆ. ಇದು ಜೂನ್ ೧೭ ರಂದು ಸಂಪೂರ್ಣಗೊಳ್ಳಲಿದೆ. 
ಐಐಟಿ ದೆಹಲಿಯಲ್ಲಿ ಈ ಕೋರ್ಸ್ ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಚಾಲನೆ ನೀಡಿದ್ದಾರೆ. 
"ಅರವಿಂದ್ ಸುಬ್ರಮಣಿಯನ್ ಮತ್ತೆ ಶೈಕ್ಷಣಿಕ ವಲಯಕ್ಕೆ ಬಂದು ಕೋರ್ಸ್ ನಡೆಸಿಕೊಡುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ಅವರು ನಿರ್ದೇಶಿಸಲಿರುವ ಈ ಶಿಕ್ಷಣ ನಮ್ಮೆಲ್ಲರಿಗೂ ಉಪಯೋಗವಾಗಲಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗ ಸಿಗಲಿದೆ" ಎಂದು ಜೇಟ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ. 
ಮಧ್ಯಾಹ್ನದಿಂದ ಸಂಜೆ ೫:೩೦ ರವರೆಗೆ ಈ ಕೋರ್ಸ್ ಜರುಗಲಿದೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ. 
ಭಾರತ ಮತ್ತು ಜಾಗತಿಕ ಆರ್ಥಿಕತೆಯ ಇತಿಹಾಸ, ವಿತ್ತೀಯ ನೀತಿ ಮತ್ತು ಜಿ ಎಸ್ ಟಿ ಈ ಕೋರ್ಸ್ ನಲ್ಲಿನ ಪ್ರಮುಖ ವಿಷಯಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com