ಜೂ.14 ರಂದು ಮಂಡಸೌರ್ ಗೆ ಭೇಟಿ ನೀಡಲಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್

ರೈತರ ಪ್ರತಿಭಟನೆ, ಗೋಲಿಬಾರ್ ನಿಂದಾಗಿ ಗಲಭೆ ಉಂಟಾಗಿದ್ದ ಮಧ್ಯಪ್ರದೇಶದ ಮಂಡಸೌರ್ ಗೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.14 ರಂದು ಭೇಟಿ ನೀಡಲಿದ್ದಾರೆ.
ಶಿವರಾಜ್ ಸಿಂಗ್ ಚೌಹ್ವಾಣ್
ಶಿವರಾಜ್ ಸಿಂಗ್ ಚೌಹ್ವಾಣ್
Updated on

ಭೋಪಾಲ್: ರೈತರ ಪ್ರತಿಭಟನೆ, ಗೋಲಿಬಾರ್ ನಿಂದಾಗಿ ಗಲಭೆ ಉಂಟಾಗಿದ್ದ ಮಧ್ಯಪ್ರದೇಶದ ಮಂಡಸೌರ್ ಗೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.14 ರಂದು ಭೇಟಿ ನೀಡಲಿದ್ದಾರೆ.  


ಸರ್ಕಾರಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮಂಡಸೌರ್ ಗೆ ಭೇಟಿ ನೀಡಲಿರುವ ಶಿವರಾಜ್ ಸಿಂಗ್ ರೈತ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮಂಡಸೌರ್ ನಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣವನ್ನು ನಿಯಂತ್ರಣಕ್ಕೆ ತರಲು ಉಪವಾಸ ನಿರಶನ ಆರಂಭಿಸಿದ್ದ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.11 ರಂದು ಉಪವಾಸವನ್ನು ಅಂತ್ಯಗೊಳಿಸಿದ್ದರು.

ರೈತರ ಸಾಲ ಮನ್ನ ಮಾಡಲು ಆಗ್ರಹಿಸಿ ಜೂ.1 ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮಂಡಸೌರ್ ನಲ್ಲಿ ಗೋಲಿಬಾರ್ ನಡೆದು ರೈತರು ಸಾವನ್ನಪ್ಪಿದ್ದರು. ಪರಿಣಾಮವಾಗಿ ರೈತರ ಪ್ರತಿಭಟನೆ ಗಲಭೆಗೆ ತಿರುಗಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜೂ.14 ರಂದು ಮಂಡಸೌರ್ ಗೆ ತೆರಳಲಿರುವ ಸಿಎಂ ಚೌಹ್ವಾಣ್ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com