ಸಮಗ್ರತೆ ಸೇನಾ ವೃತ್ತಿಗೆ ಅಡಿಪಾಯವಾಗಿದೆ. ಸೇನೆಯ ಸಮಗ್ರತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿದರೆ ನಾವು ನಮ್ಮ ಸಮಾಜದ ವಿಶ್ವಾಸವನ್ನೇ ಕಳೆದುಕೊಂಡಂತಾಗುತ್ತದೆ. ಸೇನಾ ಪಡೆಯನ್ನು ಸಮಾಜ ನಂಬದೇ ಹೋದರೆ ದೇಶಕ್ಕೆ ತನ್ನ ಸೇನೆ ಹಾಗೂ ತನ್ನನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ, ಆದ್ದರಿಂದ ಸಮಗ್ರತೆಯ ಮಾನದಂಡಗಳನ್ನು ಕಾಯ್ದುಕೊಳ್ಳಬೇಕೆಂದು ಭಾರತೀಯ ಸೇನಾ ಮುಖ್ಯಸ್ಥರು ಕರೆ ನೀಡಿದ್ದಾರೆ.