ಈ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವರೆಗೂ ರಾಜ್ಯದಿಂದ ನೇಪಾಳಕ್ಕೆ ನೇರ ಬಸ್ ಸಂಪರ್ಕ ಇರಲಿಲ್ಲ. ಉತ್ತರಾಖಂಡ್ ನಿಂದ ನೇಪಾಳಕ್ಕೆ ತೆರಳಬೇಕಿದ್ದರೆ, ನವದೆಹಲಿ ಮೂಲಕ ಸಂಚರಿಸಬೇಕಿತ್ತು. ಆದರೆ ನೇಪಾಳ ಮೂಲದವರು ಉತ್ತರಾಖಂಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗಾಗಿ ನೇಪಾಳಕ್ಕೆ ನೇರ ಬಸ್ ಸಂಪರ್ಕವನ್ನು ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.